IMPORTANCE OF DHANURMAASA

🕉 *ಧನುರ್ಮಾಸ ಆರಂಭ 16-12-2017 ಮಕರಸಂಕ್ರಾಂತಿಯ ವರೆಗೆ ಮೂರು ರಂಗ ದರ್ಶನಕ್ಕೆಪ್ರಶಸ್ತ ಸಮಯ ದರ್ಶನಕ್ಕಾಗಿ ದರ್ಶನ ಮಾಡಿ ಅನುಗ್ರಹ ಪಡೆಯಬಹುದು.* 🕉

ಅದಿ ರಂಗನಾಥ, ಮಧ್ಯ ರಂಗನಾಥ
ಅಂತ್ಯ ರಂಗನಾಥ
ತ್ರಿರಂಗ ದರ್ಶನಂ - TRI RANGA DARSHANAM
ಒಂದೇ ದಿನದಲ್ಲಿ ಮೂರು ಕಡೆ ಬೆಳಿಗ್ಗೆ ಯಿಂದ ಸಂಜೆ ಸೂರ್ಯ ಹಸ್ತದ ಒಳಗೆ
ಎರಡು ದಾರಿಯಲ್ಲಿ ದರ್ಶನ ಪಡೆಯಬಹುದು.

ಒಂದನೆಯ ದಾರಿ. 

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR 
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL 
ಯಳಂದೂರು - YALANDUR 
ಚಾಮರಾಜನಗರ - C.R.NAGAR 
ಬೆನಕನಹಳ್ಳಿ - BINAKANAHALLI 
ಡಿಂಬಮ್ - DIMBAM 
ಬನ್ನಾರಿ - BANNARI 
ಸತ್ಯಮಂಗಲ - SATYAMANGALA
ಗೋಪಿಚೆಟ್ಟಿಪಾಳ್ಯ - GOPICHETTIPALAYAM
ಈರೋಡ್ - ERODE
ನಾಮಕಲ್ - NAMAKHAL 
ತೂಟ್ಟಯಮ್ - THOTTAYAM 
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM 
ತಿರುಚ್ಚಿ ಶ್ರೀರಂಗಂ - TIRCHY SRIRANGAM 
ಅಂತ್ಯರಂಗ - ANTHYA RANGAM

ಎರಡನೆಯ ದಾರಿ.

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR 
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL 
ಮಹದೇಶ್ವರಬೆಟ್ಟ - M M HILLS
ಪಾಲರ್ - PALAR
ಮೆಟ್ಟೂರು  - METTUR
ಸೇಲಂ - SELAM
ನಾಮಕಲ್ - NAMAKHAL 
ತೂಟ್ಟಯಮ್ - THOTTAYAM 
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM 
ತಿರುಚ್ಚಿ ಶ್ರೀರಂಗಂ - TIRCHY SRIRANGAM 
ಅಂತ್ಯರಂಗ - ANTHYA RANGAM

ಕಾವೇರಿ ನದಿಯ ದಡದಲ್ಲಿರುವ ದೇವಸ್ಥಾನಗಳು.

ತ್ರಿರಂಗ ದರ್ಶನದ ದೇವಾಲಯಗಳು

*ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ*

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿವೆ ರಂಗನಾಥನ ತ್ರಿರಂಗ ಕ್ಷೇತ್ರಗಳು. ರಂಗನಾಥನ ಈ ತ್ರಿರಂಗ ಕ್ಷೇತ್ರಗಳು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಲೇಖನವು ಆ ಮೂರು ರಂಗ ಕ್ಷೇತ್ರಗಳು ಯಾವುವು ಹಾಗೂ ಅವೆಲ್ಲೆಲ್ಲಿವೆ ಎಂಬುದರ ಕುರಿತು ತಿಳಿಸುತ್ತದೆ.

ಮೊದಲ  ಅದಿ ರಂಗ ಶ್ರೀರಂಗಪಟ್ಟಣದ ಕರ್ನಾಟಕ  ,

ಶ್ರೀರಂಗಪಟ್ಟಣ: ಮೂರು ರಂಗಗಳ ಪೈಕಿ ಮೊದಲನೇಯ ಆದಿ ರಂಗವೆ ಈ ಕ್ಷೇತ್ರ. 

ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.

ಶ್ರೀರಂಗಪಟ್ಟಣ: ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ.

ವಿಶೇಷ ಸೂಚನೆ : ಧನುರ್ಮಾಸದಲ್ಲಿ ಬೆಳಿಗ್ಗೆ 5 ಗಂಟೆಗೆ ದರ್ಶನ ವ್ಯವಸ್ಥೆ ಇರುವುದು.

ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.

ಎರಡನೆಯ  ಮದ್ಯ ರಂಗ ಶಿವನಸಮುದ್ರ ಕರ್ನಾಟಕ.

ಶಿವನಸಮುದ್ರಂ: ತ್ರಿರಂಗ ಕ್ಷೇತ್ರಗಳ ಎರಡನೇಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ. 

ಶ್ರೀರಂಗಪಟ್ಟಣದಿಂದ ಮಳುವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. 

ಸಾಂಕೇತಿಕವಾಗಿ ಇದು ವಿಷ್ಣುವಿನ ಯವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ.

ಕೊನೆಯ ಮೂರನೆ  ಅಂತ್ಯ ರಂಗ ಶ್ರೀರಂಗಂ ತಮಿಳುನಾಡು ,

ಶ್ರೀರಂಗಂ: ತ್ರಿರಂಗಗಳ ಪೈಕಿ ಕೊನೆಯ ಅಥವಾ ಅಂತ್ಯ ರಂಗವು ತಮಿಳು ನಾಡಿನ ಶ್ರೀರಂಗಂನಲ್ಲಿದೆ. ತಿರುಚ್ಚಿಯಿಂದ ಶ್ರೀರಂಗಂಗೆ ಬಸ್ ಸೌಲಭ್ಯವಿದೆ. 

ಚೆನ್ನೈ, ಕನ್ಯಾಕುಮಾರಿ, ಹೈದರಾಬಾದ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಮಂಗಳುರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಮ್, ತೂತುಕುಡಿ, ಕೊಲ್ಲಮ್, ತೆಂಕಸಿ ಮತ್ತು ತಿರುಪತಿಯಿಂದ ಬಸ್ ಸೌಕರ್ಯಗಳು ತಿರುಚ್ಚಿಗೆ ಇವೆ. ಶ್ರೀರಂಗಂನಲ್ಲಿರುವ ಈ ದೇವಾಲಯವು ತ್ರಿರಂಗಗಳ ಪೈಕಿ ಅತಿ ದೊಡ್ಡ ದೇವಾಲಯವಾಗಿರುವುದೂ ಅಲ್ಲದೆ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.

ಧನುರ್ಮಾಸದ ಸಮಯದಲ್ಲಿ ದೇವಾಲಯ ಬೆಳಿಗ್ಗೆ 5ಗಂಟೆಗೆ ದರ್ಶನದ ವ್ಯವಸ್ಥೆಯ ಕಾರಣ ಒಂದೇ ದಿನದಲ್ಲಿ ಮೂರು ರಂಗನಾಥ ಸ್ವಾಮಿ ದರ್ಶನ ಪಡೆಯಬಹುದು.
ವೈಕುಂಠ ಏಕದಶಿಯ ದರ್ಶನ ವಿಶೇಷ.

Comments